Thursday, March 1, 2018

ಯುಗಾಂತ್ಯದ ಲಕ್ಷಣಗಳೇ???

*ನಡೆಯು ತ್ತಿರುವುದೆಲ್ಲಾ ಯುಗಾಂತ್ಯದ ಲಕ್ಷಣಗಳೇ ???* 

ದ್ವಾಪರ ಯುಗದ ಅಂತ್ಯದಲ್ಲಿ ಒಂದೇ ಸೂರಿನಡಿಯಲ್ಲಿರಬೇಕಾಗಿದ್ದ ದಾಯಾದಿಗಳು ಹೆಣ್ಣಿಗಾಗಿ ಅಥವಾ ಹೆಣ್ಣಿನ ಕಾರಣಕ್ಕಾಗಿ ಮತ್ತು ಮಣ್ಣಿಗಾಗಿ ಬಡಿದಾಡಿಕೊಂಡು ಶಿಷ್ಯರು ,ಕಿರಿಯರು ಕಣ್ಣೆದುರೇ ಗುರು , ಹಿರಿಯರ ಸಾವನ್ನು ಕಂಡರು..ತಂದೆ ತಾಯಿಯರು ಮಕ್ಕಳ ಮೊಮ್ಮಕ್ಕಳ ಸಾವನ್ನು ಕಂಡರು ,ಹಾಗೆಯೇ ಮಕ್ಕಳು ಮೊಮ್ಮಕ್ಕಳು ತಮ್ಮ ತಂದೆ ತಾತಂದಿರ ಸಾವನ್ನು ಕಂಡರು ಯಾರು ಯಾರನ್ನು ಪ್ರೀತಿಸಿ ಪಾಲಿಸಬೇಕಿತ್ತೋ ಅಂಥವರೇ ಸಾವಿಗೆ ಕಾರಣರಾದರು ಶುಭ ಕಾರ್ಯಗಳು ನಡೆಯಬೇಕಿದ್ದಲ್ಲಿ ಅಶುಭ ಕಾರ್ಯಗಳು ನಡೆಯುವಂತಾಯಿತು ..ಮನೆಮಂದಿಯಲ್ಲಿ ಕಲಹ, ಕಾರಣ ವಿಚಾರಗಳಿಲ್ಲದೆ ನಡೆದ ಯಾದವೀ ಕಲಹ ಕೊನೆಯಲ್ಲಿ ಎಲ್ಲರೂ ಮಣ್ಣಲ್ಲಿ ಮಣ್ಣಾಗಿ ಹೋಗುವಂತಾಯಿತು. ದ್ವಾಪರ ಮಾತ್ರವಲ್ಲ ಕೃತ ,ತ್ರೇತೆಯಲ್ಲೂ ಹೆಚ್ಚು ಕಮ್ಮಿ ಹೀಗೆಯೇ ನಡೆಯಿತು.. ಕೊನೆಯ ಕಾಲದಲ್ಲಿ ಮರ್ಯಾದಾ ಪುರುಷೋತ್ತಮ ,ರಘುವಂಶ ಲಲಾಮನಾದ ಶ್ರೀರಾಮನೂ ಹೇಳಿದ್ದು ಅದನ್ನೇ

..." *ನೋವು ನಲಿವುಗಳಿಂದ ಕೂಡಿದ ಜೀವನವ ಕಂಡಾಯ್ತು ..* ಕೊನೆಯ ಬಾರಿಗೆ ಅಪ್ಪಿಕೊಳ್ಳೋ ಎನ್ನ ಮೋಹದಿಂದಾ ..ಎಂದು ತಮ್ಮನಾದ ಲಕ್ಷ್ಮಣನಲ್ಲಿ ಹೇಳಿದನಂತೆ ..ಹಾಗೆ ಆ ದೇವನಾದ ಮಾನವಾಧಿಪತಿಗೂ ಗೊತ್ತಾಗಿತ್ತು ಶೀಘ್ರದನ್ನೇ ತನ್ನ ಅಂತ್ಯವಾಗುತ್ತದೆ ಎಂದು ..

ಅಂತೆಯೇ *ದ್ವಾಪರೆಯಲ್ಲಿ* ಮಾನವರೂಪಿಯಾದ *ಶ್ರೀಕೃಷ್ಣ ಪರಮಾತ್ಮನೇ* ಜರನೆಂಬ ಬೇಡನಿಂದ ಬಿಡಲ್ಪಟ್ಟ ಬಾಣ ಕಾಲಿಗೆ ತಾಗಿ ರಕ್ತಸ್ರಾವದಿಂದಲಾಗಿ ಸಾವನ್ನು ಕಂಡುಕೊಳ್ಳುವಂತಾಯಿತು ಎಂದರೆ ಇದೆಲ್ಲ ಕೇವಲ ನೆಪ ಮಾತ್ರ ..ಒಳಿದುದೆಲ್ಲವೂ ಜಗನ್ನಿಯಾಮಕನ ಇಚ್ಛೆ ಯಂತೆಯೇ ನಡೆಯುತ್ತದೆ ಎಂದರೆ ತಪ್ಪಾಗಲಾರದು ..

 *ಇಲ್ಲವೆಂದಾದರೆ* .....

ಈ ಕಲಿಯುಗದಲ್ಲಿ ಹೀಗೆಲ್ಲ ಆಗುವುದಕ್ಕಿದೆಯೇ ಪ್ರತಿ ದಿನವೂ ..ದಿನ ದಿನವೂ ..ನಮ್ಮವರು ನಮ್ಮ ಪ್ರೀತಿ ಪಾತ್ರರು ..ಆತ್ಮೀಯರು ..ಒಡ ಹುಟ್ಟಿದವರು ..ಮಿತ್ರರು ಇನ್ನಿಲ್ಲವಾಗುತ್ತಿದ್ದಾರೆ ..ರೋಗ ..ಅಪಘಾತ ನಮ್ಮವರನ್ನು ಕಳೆದುಕೊಳ್ಳುವ ಆ ರೋದನೆ..ದುಃಖ ..ನಿರಂತರ ಹುಟ್ಟಿಸಿದ ತಂದೆ ತಾಯಂದಿರು ತಮ್ಮ ಮಕ್ಕಳ ಮೊಮ್ಮಕ್ಕಳ ಸಾವನ್ನು ಕಾಣುವಂತಹ ಸಮಯ ಇದಾಗುತ್ತಿದೆ *ಪುತ್ರ ಶೋಕಂ ನಿರಂತರಂ ..* ಅನುಭವಿಸಿದವರಿಗೆ ಗೊತ್ತು ಯಾರಿಗೂ ಬಾರದಿರಲಿ ..ಎಲ್ಲವೂ ನೆವನ ..ನೆಪ ಮಾತ್ರ ಕಾಲನ ಕರೆ ಬಂದಾಗ ಎಲ್ಲರೂ ಎಲ್ಲವರೂ ಹೋಗಲೇ ಬೇಕು ....

ಆದರೆ ಇಂದು ನಡೆಯುತ್ತಿರುವುದು ಸ್ವಯಂ ಕೃತಾಪರಾಧ ಅಲ್ಲದೆ ಮತ್ತಿನ್ನೇನು ??? . *ಗುರು ..ಗುರು ಪೀಠ .ಹೆಣ್ಣೊಬ್ಬಳು ನೆಪ ಮಾತ್ರ* .ಸಮಾಜ ಶಿಷ್ಯರನ್ನು ಮುನ್ನಡೆಸಬೇಕಾದ ಅತ್ಯುನ್ನತ ಸ್ಥಾನದಲ್ಲಿ ಇರುವ ಶ್ರೇಷ್ಟ್ಟ ಪರಂಪರೆ , ಪೀಠದಲ್ಲಿರುವ ದೈವ ಸಮಾನರಾದ ಗುರುವೊಬ್ಬರ ಮೇಲೆ ಗುರುತರವಾದ ಆಪಾದನೆ ಓಲೈಸುತ್ತಿದ್ದವರೇ ದೂರ ಮಾಡಿದರು ಜೊತೆಗಿದ್ದವರೇ ದೂರಾದರು ಬಂಧುಗಳು ದೂರವಾದರು ಬಾಂಧವರು ಮುಖ ತಿರುಗಿಸುವಂತಾಯಿತು .ದೊಡ್ಡಪ್ಪ ಚಿಕ್ಕಪ್ಪ ಅಪ್ಪ ಮಕ್ಕಳು..ಅಣ್ಣ ತಮ್ಮ ಅಕ್ಕ ತಂಗಿ ..ಗಂಡ ಹೆಂಡತಿ ಎಲ್ಲ ಬಿಡಿ ..ಗುರಿಕಾರರು ಇಲ್ಲದ ಸಮಾಜ ..ಪುರೋಹಿತರು ಬಾರದ ಮನೆಗಳು ..ಆ ಶಿಷ್ಯ ವರ್ಗ ..ಊಹಿಸಲೂ ಆಗದ ಆಲೋಚನೆಗೂ ಸಿಗದ ಸಮಾಜ ..ಒಬ್ಬೊಬ್ಬರು ಒಂದೊಂದು ಕಡೆ ..ಕೋರ್ಟು ..ಕೇಸು ..ಬಹಿಷ್ಕಾರ ..ಹೀಗಳೆಯುವಿಕೆ ..ಎಲ್ಲ ಹಿರಿಯ ಗುರು ಪೀಠದವರು ಸೇರಿ ಆಪಾದಿತರಿಗೆ ಬಹಿಷ್ಕಾರ ..
ಅದೇ ಆಪಾದಿತರಿಂದ ಪುನಃ..ಮತ್ತೆ..ಮತ್ತೆ ಅದೇ ತಪ್ಪು ..ಜಗದ್ಗುರುಗಳ ನಿಂದನೆ ಕೇಳುವುದಕ್ಕಾಗೋದಿಲ್ಲ ..ನೋಡೋದಕ್ಕೂ ಉಹುಂ...ಇಲ್ಲಾ ..
ಇದೇಗುರುಗಳು ಒಂದೊಮ್ಮೆಗೆ ತಮ್ಮದೇ ಆಶೀರ್ವಚನದಲ್ಲಿ ಹೇಳಿದ್ದು ಕೇಳಿದ ನೆನಪಾಗುತ್ತಿದೆ .. *"ಅನ್ಯ ಕ್ಷೇತ್ರೇ ಕೃತಂ ಪಾಪಂ ಪುಣ್ಯಕ್ಷೇತ್ರೇ ವಿನಶ್ಯತಿ! ..ಪುಣ್ಯ ಕ್ಷೇತ್ರೇ ಕೃತಂ ಪಾಪಂ ವಜ್ರ ಲೆಪೋ ಭವಿಷ್ಯತಿ !!"* ಇದು ಯಾರಿಗೆ ? ಸಾಮಾನ್ಯರಿಗೆ ಮಾತ್ರವೆಯಾ ಅನ್ವಯಿಸುವುದು ? ಅಲ್ಲವೆಂದಾದರೆ ಹೀಗೆಲ್ಲ ಆಗುವುದಕ್ಕಿದೆಯಾ ? ಆಗಬೇಕಿತ್ತಾ ? ಹಿರಿಯರು , ವೇದ ಶಾಸ್ತ್ರ ಓದಿ ಬಲ್ಲವರೂ, ಜ್ಞಾನಿಗಳು, ಹೃದಯ ಶ್ರೀಮಂತಿಕೆ ಇರುವವರು ,ತತ್ವ ಜ್ಞಾನಿಗಳು ,ಮೇಧಾವಿಗಳು ..ಅಲ್ಲ ಕೇವಲ ಒಳ್ಳೆಯ ಮನಸ್ಸಿರುವವರು ಒಮ್ಮೆ ಯೋಚಿಸಿ ..ಆಲೋಚಿಸಿ ..ತಪ್ಪಿರುವುದನ್ನು ಒಪ್ಪಿ ..ಬಿಟ್ಟವರನ್ನು ಅಪ್ಪಿ .. ಅಲ್ಲ ತಪ್ಪಿದ್ದನ್ನು ಸರಿಪಡಿಸಿ . ಆಗದು ಆಗದೆ ಆಗದು ಯಾಕೆ ಆ ದೇವರೇ ಪ್ರತ್ಯಕ್ಷನಾಗಿ ಬಂದರೂ ಆಗದ ಮಾತು ..ಒಪ್ಪುವವರ ಒಪ್ಪರು ..ದೇವರನ್ನೂ ನಿಂದಿಸಿಯಾರು . *ಮಾನವ ಜನುಮ ದೊಡ್ಡದು ಇದ ಹಾನಿ ಮಾಡಬೇಡಿ ಹುಚ್ಚರಿರಾ...* ಇಲ್ಲವೆಂದಾದರೆ ಈಗ ಹುಟ್ಟಿದ..ಅಲ್ಲ ..ಬೆಳೆಯುತ್ತಿರುವ ಸಣ್ಣ ಸಣ್ಣ ಮಕ್ಕಳೂ ಕೇಳುವಂತಾಯಿತು ಯಾಕೆ ಹೀಗೆ ಎಂದು .. ಅವರಿಗೆ ಹೇಳುವ ನೈತಿಕತೆಯನ್ನು ನಾವೆಲ್ಲವರೂ ಅಂದರೆ ಈಗಿನ ಕಾಲ ಘಟ್ಟದಲ್ಲಿ ಇರುವ *ಅಬಾಲವೃದ್ಧರಾದಿಯಾಗಿ* ಎಲ್ಲರೂ ಅಂದರೆ ಯುವಕರು ಹಿರಿಯರು ವೃದ್ಧರು ಎಲ್ಲರೂ ಈಗಿನ ಈ *ವ್ಯತಿರಿಕ್ತವಾದ ಅನಿಶ್ಚಿತತೆಗೆ ಕಾರಣೀಭೂತರು ಹೌದೇ ಹೌದು .. ಮುಂದಿನ ವಂಶ ವಾಹಿನಿಗೆ ಉತ್ತರವನ್ನು ಕೊಡುವಂತಾಗಲಿ .* .ಇದುವೇ ಅಂದರೆ ನಮ್ಮ *ಈ ಕಾಲವೇ ಕಲಿಯುಗದ ಅಂತ್ಯವಾಗದಿರಲಿ* ನಮ್ಮ ಮಕ್ಕಳು ಮೊಮ್ಮಕ್ಕಳನ್ನು ಸ್ನೇಹ ಬಾಂಧವ್ಯ ಪ್ರೀತಿಯಿಂದ ಕಾಣುವಂತಾಗಲಿ ಹಾಗೆಯೇ *ನಮಗೆ ನಮ್ಮ ತಾತ ಮುತ್ತಾತಂದಿರಿಗೆ ದೊರಕಿದ ಆ ಯೋಗ ಭಾಗ್ಯ* ಅವರಿಗೂ ಅಂದರೆ ನಮ್ಮ *ಪುತ್ರ ಪೌತ್ರಾದಿಗಳಿಗೂ* (ಮಕ್ಕಳು ಮೊಮ್ಮಕ್ಕಳಿಗೂ ) ಲಭಿಸಲಿ ಎಂದು ಆ ಸೃಷ್ಟಿಕರ್ತನಲ್ಲಿ ಹಾಗೂ ಜಗನ್ನಿಯಾಮಕನಲ್ಲಿ ಸಂಪ್ರೀತಿಯಿಂದ ಕರಜೋಡಿಸಿ ಪ್ರಾರ್ಥನೆ ..

 *ಸರ್ವ ಬಾಧಾಪಶಮನಂ ತ್ರೈಲೋಕ್ಯ ಅಖಿಲೇಶ್ವರೀ*

 *ಮೃತ್ಯೋರ್ಮಾ ಅಮೃತಂಗಮಯ* 

 *ಲೋಕಾ ಸಮಸ್ತಾ ಸುಖಿನೋಭವಂತು ..ಓಂ ಶಾಂತಿ**

Wednesday, November 17, 2010

5 types of women men can't stand....

Do you have any idea about what type of women put men off? Here's a quick checklist of the personality types men abhor
We all know what women don't like in men, but do we have even the slightest idea about what type of women put off men? Here is the lowdown on the personality types men don't like at all.

Cribber: Women who crib, talk negatively and belittle people are a great turn-off. Sure we all have our bags full of complaints, but it is one thing to complain once in a while, and it's something else to crib big time 24x7 about every issue or every person one comes across. Men can't understand why a woman has to crib and bitch all the time. Either you do something about the issue or stop complaining - it's as simple as that.

Weight-watcher: 'Oh can't have beer, it has 150 calories', 'I must hit the gym everyday' - if these are your favourite catchwords, you have trouble coming your way. There is only so much diet, exercise regimens men can take and if you are too conscious, a man is likely to be exasperated. Women need to know when to give in 'without throwing their weight around'!

In-law basher: Agreed only the fortunate are blessed with a good set of in-laws. So if you are not one of the lucky ones, will you constantly bash them up verbally? They are somebody's parents and if you don't have anything nice to say something about them, don't say anything. How does that sound?

Worker bee: If you are buzzing nineteen to a dozen only about the presentations you have to make for the boss, deadlines, colleagues, HR head and the office janitor - it's obvious you have nothing else to talk about. A man may want to know about your interests, your views on him, and more, but you prefer to hide behind 'work' all the time. If you want a man, any man actually - get a life first.

Agony aunt: There are some women who constantly feel they are an 'advisory body'. They feel it is their business to hear out the whines of everyone around them and suggest suitable solutions. They are so deeply involved in this part-time job that they inadvertently sound like they are advising you as well. Nobody wants to date a mom, you know.


Tuesday, September 21, 2010

rama...rama...rama...

ಇವ ಕಣಾ ಶ್ರೀರಾಮ! ಶೇಶನೆ ಪವಡಿಸಲು ಸುಖ ತಲ್ಪ!
ಪಾಲ್ಗಡಲಿವಗೆ ಮನೆಯಂಗಳವು ಮಾಯೆಯು ನಿರತ ಸೇವಿಪಳು!!
ಇವನರಸಿಯೇ ಸೀತೆ! ನೋಡಲಿವನ ವಕ್ಶದೊಳಿಹಳು!
ಲೀಲೆಯಿಂ ಭುವಿಗವತರಿಸಿ ನಟಿಸಿದ ನಟನೆಗಳುವೇಕೆ?!!
ರಾಮಾ...ರಾಮಾ....ರಾಮಾ...ರಾಮಾ...ರಾಮಾ!!

Monday, September 20, 2010

a word by angel!!!


"All we are crying for our own problems/worries..that'z common!!! One who cry for others problem that'z greatness. that time GOD will also really kind full to that person" - ANGEL told me n my dream.


"ನಾವೆಲ್ಲರೂ ಅಳುವುದು ನಮಗಾಗಿ,ನಮ್ಮ ಕಸ್ಟಗಳಿಗಾಗಿಯೇ ಹೊರತು ಇತರರಿಗಾಗಿ ಅಲ್ಲ..ಯಾರು ಬೇರೆಯವರ ಕಸ್ಟಗಳಿಗಾಗಿ ಮಮ್ಮಲ ಮರುಗಿ ಅಳುತ್ತಾರೋ ಅವರಿಗಾಗಿ ದೇವರೇ ಮರುಗಿ ಕರುಣೆಯನ್ನು ಬೀರುತ್ತಾನೆ...." ದೇವದೂತ ಹೇಳಿದ ಮಾತು!!!!

Sunday, September 12, 2010

ರಾಮನ ಪ್ರತಿಬಿಂಬಗಳಲ್ಲಿ ರಾಮಾಯಣದ ಪ್ರತಿಬಿಂಬ...!

|| ಹರೇರಾಮ ||

ಪ್ರಶ್ನೆಗಳು ಎಲ್ಲಿ, ಯಾವಾಗ, ಯಾವ ರೂಪದಲ್ಲಿ ಉದ್ಭವಿಸಿದರೂ ಮಹರ್ಷಿಗಳು ಉತ್ತರವನ್ನು ಹುಡುಕುತ್ತಿದ್ದುದು ಅಂತರಂಗದಲ್ಲಿಯೇ..
ಬದುಕಿನ ಸಕಲ ಪ್ರಶ್ನೆಗಳ ಸಮಾಧಾನ ನಮ್ಮ ಅಂತರಂಗದಲ್ಲಿಯೇ ಹುದುಗಿದೆ.

ಕಣ್ಮುಚ್ಚಿ ರಾಮಾಯಣವನ್ನು ಕಂಡ, ವಿರಚಿಸಿದ ಮಹಾಕವಿಗೆ ಕಣ್ತೆರೆದಾಗ ಎದುರಾದ ಪ್ರಶ್ನೆ.. “ಈ ಅನರ್ಘ್ಯ ಕೃತಿಯನ್ನು ಲೋಕದ ಮುಂದಿಡಬಲ್ಲವರು ಯಾರು?”

ಕಣ್ತೆರೆದಾಗ ಮೂಡಿದ ಪ್ರಶ್ನೆಗೆ ಕಣ್ಮುಚ್ಚಿ ಉತ್ತರ ಹುಡುಕತೊಡಗಿದರವರು..
ರಾಮಾಯಣವೆಲ್ಲಿ ಕಂಡಿತೋ ಅಲ್ಲೇ ತಾನೇ ರಾಮಾಯಣದ್ವಾರವನ್ನು ಹುಡುಕಬೇಕಾದದ್ದು…!
ಮೈಮರೆತ ಧ್ಯಾನಮಗ್ನತೆಯಲ್ಲಿ ಮೈದೋರಿದ ರಾಮಸೂರ್ಯನಿಂದ ಹೊರಹೊಮ್ಮಿದ ಎಳೆಯ ಕಿರಣಗಳೆರಡು ಬಳಿಸಾರುವುದನ್ನು ಕಂಡ ಮುನಿ ಕಣ್ದೆರೆದರೆ..



ಅದೋ…!
ಕುಶ-ಲವರು ಪಾದಮೂಲದಲ್ಲಿ…!!

ಉತ್ತರವನ್ನು ಹುಡುಕಿಕೊಂಡು ಎಲ್ಲಿಯೊ ಅಲೆಯಬೇಕಾದ ಪ್ರಮೇಯವೇ ಇರಲಿಲ್ಲ..!
ಪ್ರಶ್ನೆ ಹುಟ್ಟುವ ಮೊದಲೇ ಉತ್ತರ ಹುಟ್ಟಿಯಾಗಿತ್ತು..!
ಅದು ಅಲ್ಲಿಯೇ..ಅವರ ಬಳಿಯಲ್ಲಿಯೇ..ಅವರ ಆಶ್ರಮದಲ್ಲಿಯೇ ನೆಲೆಸಿತ್ತು..!
ಅವರ ಶಿಷ್ಯ ವೃತ್ತಿಯನ್ನು ಕೈಗೊಂಡಿತ್ತು..!
ಅದನ್ನೇ ಕಾಯುತ್ತಿತ್ತೋ ಎಂಬಂತೆ, ಪ್ರಶ್ನೆ ಮೂಡಿದೊಡನೆ ಕಣ್ಮುಂದೆ ಬಂದು ನಿಂತಿತ್ತು..ಕಾಲಿಗೆರಗಿತ್ತು..!


ರಾಮಾಯಣದ ಉಪದೇಶಕ್ಕೆ ಅರ್ಹರಾದ ರಾಮನ ಪ್ರತಿಬಿಂಬಗಳು..!
ರಾಮಾಯಣದ ಉಪದೇಶಕ್ಕೆ ಕುಶ-ಲವರೇ ಅರ್ಹರು…
ರಾಮಕಥೆಯನ್ನು ಬೇರಾರು ತಾನೇ ಹೇಳಬಲ್ಲರು..?
ಹೇಳಿದರೆ ರಾಮನೇ ಹೇಳಬೇಕು..!
ಆತನಿಗೂ ತನ್ನ ಮಹಾಕಥೆಯನ್ನು ತಾನೊಬ್ಬನೇ ಹೇಳಲಾರೆನೆಂದೆನಿಸಿ ಇಬ್ಬರಾಗಿ ಕುಶ-ಲವರ ರೂಪದಲ್ಲಿ ಬಂದಿರಬಹುದೆನಿಸಿತು ಆ ಕ್ರಾಂತದರ್ಶಿಗೆ…!

ಕುಶ-ಲವರನ್ನು ಕಣ್ದಣಿಯೆ ನೋಡಿದರು ಆದಿಕವಿಗಳು..
ಭೂಮಂಡಲಾಧೀಶ್ವರನ ಮಕ್ಕಳು ಮುನಿವೇಷದಲ್ಲಿ,ಅನಾಥರಂತೆ ಆಶ್ರಮವಾಸಿಗಳಾಗಿರುವುದನ್ನು ಕಂಡು ಕರಗಿ ಮರುಗಿತು ಅವರ ಹೃದಯ..
ಅನರ್ಘ್ಯವಾದ ಈ ಜೋಡಿಮುತ್ತುಗಳು ಆಶ್ರಮಕ್ಕಿಂತ ಅರಮನೆಯಲ್ಲಿ ಭೂಷಣವಲ್ಲವೇ..? ಎಂದು ಕೇಳಿತು ಅವರ ಮನಸ್ಸು..
ಕುಶ-ಲವರನ್ನು ಲೋಕಕ್ಕೆ ತಂದ, ಲೋಕದ ತಂದೆಯೊಡನೆ ಪುನರಪಿ ಬೆಸೆಯುವ ಬಗೆ ಯಾವುದೆಂದು ಚಿಂತಿಸತೊಡಗಿದ ಮುನಿಗಳಿಗೆ ಉತ್ತರ ರೂಪದಲ್ಲಿ ಹೊಳೆದಿದ್ದು ರಾಮಾಯಣವೇ..!

ತಾಯಿಯಿಂದ ತಂದೆಯೆಡೆಗೆ…
ಗುರುವಿನಿಂದ ಪ್ರಭುವಿನೆಡೆಗೆ..
ಆಶ್ರಮದಿಂದ ಅರಮನೆಯೆಡೆಗೆ.. ಈ ಮಕ್ಕಳನ್ನು ರಾಮಾಯಣವೇ ಕರೆದೊಯ್ಯಬಹುದಲ್ಲವೇ..?

ಮಕ್ಕಳಾದರೋ ಮೇಧಾವಿಗಳಾಗಿದ್ದರು..
ಸಂಪೂರ್ಣ ವೇದಾಧ್ಯಯನ ಸಂಪನ್ನರಾಗಿದ್ದರು..

ಆದರೆ ವೇದಾಕ್ಷರಗಳು ಕಂಠಸ್ಥವಾದರೆ ಸಾಲದು..
ವೇದಾರ್ಥವು ಹೃದಯಸ್ಥವಾಗಬೇಕು..!
ಶಬ್ದವು ದೇಹವಾದರೆ ಅರ್ಥವು ಅದರ ಜೀವವಲ್ಲವೇ..?
ಜೀವವಿಲ್ಲದ ದೇಹಕ್ಕೆ ಎಷ್ಟು ಬೆಲೆಯೋ, ಅರ್ಥಗ್ರಹಣವಿಲ್ಲದ ಶಬ್ದಗ್ರಹಣಕ್ಕೂ ಅಷ್ಟೇ ಬೆಲೆಯಲ್ಲವೇ..?
ವೇದಗಳನ್ನು ಮುಖೋದ್ಗತವನ್ನಾಗಿ ಮಾಡಿಕೊಂಡಿದ್ದ ಆ ಮಕ್ಕಳಿಗೆ, ವೇದಗಳ ಸಾರ-ವಿಸ್ತಾರಗಳನ್ನು ಮನಸ್ಸಿಗೆ ತಂದುಕೊಡುವ ವೇದೋಪಬೃಂಹಣದ ಕಾರ್ಯವು ಇನ್ನಷ್ಟೇ ಆಗಬೇಕಾಗಿದ್ದಿತು..!
ವೇದಗಳ ಸಾರ-ಸಂದೇಶಗಳೆಲ್ಲವೂ ವಿಸ್ತಾರವಾಗಿ ರಾಮಾಯಣದಲ್ಲಿರುವಾಗ ವೇದೋಪಬೃಂಹಣಕ್ಕೆ ರಾಮಾಯಣಕ್ಕಿಂತ ಮಿಗಿಲಾದ ಸಾಧನವಾದರೂ ಬೇರೆ ಯಾವುದಿದೆ..!?

[ರಾಮಾಯಣವು ಬಾಲಶಿಕ್ಷಣದ, ಅಷ್ಟೇ ಏಕೆ ಲೋಕಶಿಕ್ಷಣದ ಶ್ರೇಷ್ಠ ಸಾಧನವೆಂಬುದನ್ನು ಮೊದಲಾಗಿ ಅರಿತವರು ವಾಲ್ಮೀಕಿಗಳೇ..!]

ಮಹಾಕಾವ್ಯವೊಂದನ್ನು ಮಹಾಜನತೆಯ ಮುಂದಿಡಬೇಕಾದವರಲ್ಲಿ ಏನಿರಬೇಕು..?
ಕವಿ ಹೃದಯಕ್ಕೆ ಸಂವಾದಿಯಾದ ರಸಪೂರ್ಣವಾದ ಹೃದಯ..
ಹೃದಯದಲ್ಲಿ ಮನೋಜ್ಞವಾದ ಭಾವಗಳು..
ಮನೋಜ್ಞ ಭಾವಗಳಿಗೆ ಕನ್ನಡಿಯಾಗಬಲ್ಲ ಮುಗ್ಧ ಮುಖ,..
ಮುಖದ ಮುಗ್ಧತೆಯೊಡನೆ ಮೇಳೈಸುವ ಮಧುರ ಸ್ವರ,..
ಮಧುರ ಸ್ವರವನ್ನು ದಿವ್ಯರಾಗವಾಗಿ ಪರಿವರ್ತಿಸಬಲ್ಲ ಉತ್ಕೃಷ್ಟವಾದ ಗಾಯನ ಕೌಶಲ..
ಇವುಗಳಲ್ಲಿ ಯಾವುದೊಂದು ಇಲ್ಲದಿದ್ದರೂ ಪ್ರಸ್ತುತಿ ಪರಿಪೂರ್ಣವಾಗಲಾರದು..
ಇವೆಲ್ಲವೂ ಇರುವ ಎರಡು ವ್ಯಕ್ತಿತ್ವಗಳು ಲಭಿಸಿ, ಅವರಲ್ಲಿ ಪರಸ್ಪರ ಪರಿಪೂರ್ಣ ತಾಳಮೇಳ ಇರುವುದಾದರೆ ಬೇರೇನು ಬೇಕು ?

ಎಲ್ಲಕ್ಕಿಂತ ಮಿಗಿಲಾಗಿ ಅವರೀರ್ವರೂ ರಾಮನ ಮಕ್ಕಳಾಗಿದ್ದರು..!

“ಅಂಗಾತ್ ಅಂಗಾತ್ ಸಂಭವಸಿ ಹೃದಯಾತ್ ಅಧಿಜಾಯಸೇ |
ಆತ್ಮಾವೈ ಪುತ್ರನಾಮಾಸಿ..”

ಅವರ ಅಂಗ-ಪ್ರತ್ಯಂಗಗಳು ರಾಮನ ಅಂಗ-ಪ್ರತ್ಯಂಗಗಳಿಂದಲೇ ಸಂಭವಿಸಿದ್ದವು..
ಅವರ ಅಂತಸ್ತತ್ವಗಳು ರಾಮನ ಅಂತಸ್ತತ್ವಗಳಿಂದಲೇ ವಿಕಸಿತವಾಗಿದ್ದವು..
ಬಿಂಬವೊಂದರ ಅವಳಿ ಪ್ರತಿಬಿಂಬಗಳಂತೆ ರಾಮನಿಂದಲೇ ತತ್ವ-ತನುಗಳನ್ನು ಪಡೆದು ರಾಮನ ಪ್ರತಿಮೂರ್ತಿಗಳಾಗಿ ಮೈವೆತ್ತಿದ್ದ ಕುಶ-ಲವರಿಗಿಂತ ರಾಮಾಯಣವನ್ನು ಹಾಡಲು ಬೇರೆ ಯಾವ ಆಯ್ಕೆ ತಾನೇ ಸೂಕ್ತವಾದೀತು..!?

ರಾವಣಸಂಹಾರಕ್ಕೆಂದೇ ರಾಮ ಹುಟ್ಟಿದಂತೆ,
ರಾಮಾಯಣ ಪ್ರಸಾರಕ್ಕೆಂದೇ ಹುಟ್ಟಿಬಂದಿದ್ದ ರಾಮನ ಮಕ್ಕಳಿಗೆ ರಾಮಾಯಣ ಪಾಠ ಪ್ರಾರಂಭವಾಯಿತು..!

ವಾಲ್ಮೀಕಿಗಳ ಪಾಠವದು ಅಂತಃಕರಣದ ಆಟವಾಗಿತ್ತು..
ಅಲ್ಲಿ ಉಪಕರಣಗಳ ಕಾಟವಿರಲಿಲ್ಲ..
ಕಂಟ(ಲೇಖನಿ)ವೆಂಬ ಸ್ಮರಣಶಕ್ತಿಕಂಟಕದ ಪ್ರವೇಶವೇ ಇಲ್ಲದೆ ಕೇವಲ ಕಂಠಗಳ ಮಾಧ್ಯಮದಿಂದಲೇ ಮೊದಲ ಕಾವ್ಯದ ಮೊದಲ ಪಾಠ ನಡೆಯಿತು..!

ಮುನಿಗಳ ಹೃದಯದಿಂದ ಕಂಠಕ್ಕೆ ..ಅಲ್ಲಿಂದ ಕುಶಲವರ ಕಿವಿಗಳಿಗೆ..ಮತ್ತವರ ಹೃದಯಗಳಿಗೆ ನಿರಂತರವಾಗಿ ರಾಮಾಯಣವು ಪ್ರವಹಿಸತೊಡಗಿತು…
ಮುನಿಹೃದಯದ ರಾಮಾಯಣಧ್ವನಿಯು ಒಂದಕ್ಕೆರಡಾಗಿ ಕುಮಾರರ ಕಂಠಗಳಲ್ಲಿ ಪ್ರತಿಧ್ವನಿಸತೊಡಗಿತ್ತು..
ರಾಮಬಿಂಬದ ಆ ಅವಳಿ ಪ್ರತಿಬಿಂಬಗಳಲ್ಲಿ ರಾಮಾಯಣದ ಪ್ರತಿಬಿಂಬವೂ ಮೂಡತೊಡಗಿತ್ತು..!

ಆಶ್ಚರ್ಯವೆಂದರೆ..
ಸಾವಿರ ಸಾವಿರ ಶ್ಲೋಕಗಳನ್ನು ಬರಹದ ನೆರವಿಲ್ಲದೆಯೆ ಬುದ್ದಿಯಿಂದಲೇ ಬಾಯಿಗೆ ತಂದುಕೊಳ್ಳುವ ಗುರು….!
ಒಂದೇ ಒಂದು ಬಾರಿ ಗುರುಮುಖದಿಂದ ಹೊರಹೊಮ್ಮಿದ್ದನ್ನು ಹಾಗೆಯೇ ಗ್ರಹಿಸಿ, ಧರಿಸಿ, ಪುನರುಚ್ಚರಿಸುವ ಏಕಸಂಧಿಗ್ರಾಹಿಗಳಾದ ಶಿಷ್ಯರು…!!
ಅಲ್ಲಿ ಬರಹದ ಮಧ್ಯಪ್ರವೇಶವಿರಲೇ ಇಲ್ಲ..!
ಅಬ್ಬಾ…!
ಆ ಸ್ಮರಣಶಕ್ತಿಗೆ ಶರಣು ಶರಣು..!

ಇದು ಹೇಗೆ ಸಾಧ್ಯ..?

ಒಂದು ವೇಳೆ ಇದು ಸಾಧ್ಯವೇ ಹೌದಾದರೆ, ಇಂದು ನಮಗೇಕೆ ಸಾಧ್ಯವಾಗುತ್ತಿಲ್ಲ..?
ಎರಡಕ್ಕೆ ಎರಡು ಸೇರಿದರೆ ಎಷ್ಟಾಗುವುದೆಂಬುದನ್ನು ತಿಳಿಯುವಲ್ಲಿಯೂ ಯಂತ್ರಕ್ಕೆ ಪರತಂತ್ರರಾಗುವಷ್ಟು ಬುದ್ದಿ ದೌರ್ಬಲ್ಯವೇಕೆ ಬಂದಿತು ನಮಗಿಂದು..?

ಯಾವುದನ್ನು ಹೆಚ್ಚು ಹೆಚ್ಚು ಬಳಸುತ್ತೇವೆಯೋ ಅದರಲ್ಲಿ ಹೆಚ್ಚು ಹೆಚ್ಚು ಬಲವನ್ನು ತುಂಬುವಳು ಪ್ರಕೃತಿ..
ಬಳಕೆ ಕಡಿಮೆಯಾದಂತೆ ಆ ಅಂಗದ ಬಲವು ಕ್ಷೀಣಿಸುತ್ತಾ.. ಕ್ಷೀಣಿಸುತ್ತಾ.. ಕ್ರಮೇಣ ಆ ಅಂಗವೇ ಇಲ್ಲವಾಗಿಬಿಡುತ್ತದೆ..!

ನಮ್ಮ ಪೂರ್ವಜರು ಉಪಕರಣಗಳಿಗಿಂತ ಹೆಚ್ಚಾಗಿ ಅಂತಃಕರಣವನ್ನೇ ನೆಚ್ಚಿಕೊಂಡಿದ್ದರು..!
ಅಂತಃಕರಣದ ಬಳಕೆಯ ಅನಂತ ಅದ್ಭುತ ವಿಧಾನಗಳನ್ನು ಅವರು ತಿಳಿದಿದ್ದರು..
ಆದುದರಿಂದಲೇ ಅವರ ಅಂತಃಕರಣದಲ್ಲಿ ಅಪಾರ ಶಕ್ತಿಸಂಚಯವಿದ್ದಿತು..!
ಅಂದು ಬಾಹ್ಯವಾದ ಉಪಕರಣಗಳ ಅನ್ವೇಷಣೆ-ಬಳಕೆಗಳಿಗೆ ಇಂದಿರುವ ಪ್ರಾಶಸ್ತ್ಯವಿರಲಿಲ್ಲ..

ಕಾಲ ಸರಿದಂತೆ ಅಂತರಂಗ ಉಪೇಕ್ಷಿತವಾಗತೊಡಗಿತು…
ಬದುಕಿನಲ್ಲಿ ಬಹಿರಂಗಕ್ಕೆ ಒತ್ತು ಹೆಚ್ಚಾಗತೊಡಗಿತು…
ಬುದ್ಧಿ ಬಡವಾಗತೊಡಗಿತು..
ಬರಹದ ಅವಲಂಬನ ಹೆಚ್ಚತೊಡಗಿತು…

ತ್ರೇತಾಯುಗದ ರಾಮಾಯಣಕ್ಕೆ ಲಿಪಿಯ ಅಗತ್ಯವೇ ಬೀಳಲಿಲ್ಲ…
ಮುಂಬರುವ ಯುಗದ ಜನರು ಬಡಬುದ್ಧಿಯವರೆಂಬುದು ಮೊದಲೇ ವ್ಯಾಸರ ಮನಸ್ಸಿಗೆ ಬಂದಿರಬೇಕು…
ಆದುದರಿಂದಲೇ ದ್ವಾಪರದ ಮಹಾಭಾರತವನ್ನು ಬರೆಯಲು ಗಣಪತಿ ಧರೆಗಿಳಿಯಬೇಕಾಯಿತು…!

ಇಂದು..?
ನೂರು ಶ್ಲೋಕಗಳನ್ನೂ ಸರಿಯಾಗಿ ಚಿತ್ತದಲ್ಲಿ ಧರಿಸುವ ಶಕ್ತಿ ನಮಗಿಲ್ಲ..!
ನೆನಪಿಟ್ಟುಕೊಳ್ಳುವುದಕ್ಕೂ ಯಂತ್ರಗಳು ಬಳಕೆಯಾಗುವ ಕಾಲವಿದು…
ಉಪಕರಣಗಳ ಬಳಕೆ ಹೆಚ್ಚಿದಂತೆ ಅಂತಃಕರಣದ ಶಕ್ತಿ ಕುಗ್ಗಲೇಬೇಕು…
ಪ್ರಕೃತಿ ನಿಯಮವಿದು…!

ಬರಹವು ಬುದ್ಧಿವಂತಿಕೆಯ ಪ್ರತೀಕವೆಂದುಕೊಂಡಿದೆ ಆಧುನಿಕ ಸಮಾಜ…
ಆದರೆ ವಾಸ್ತವವಾಗಿ ಬರಹವು ಬುದ್ಧಿದೌರ್ಬಲ್ಯದ ಕುರುಹು..!

ಜಗತ್ತಿನ ಪ್ರಥಮಕಾವ್ಯದ ಪ್ರಥಮಪಾಠವು ನೀಡುವ ಸಂದೇಶವಿದು…
ದೇಹವೆಂಬ ಪೆಟ್ಟಿಗೆಯಲ್ಲಿ ಬದುಕಿಗೆ ಬೇಕಾಗಬಹುದಾದ ಸಕಲಸಂಗತಿಗಳನ್ನೂ ಇರಿಸಿಯೇ ದೇವರು ನಮ್ಮನ್ನು ಭುವಿಗೆ ಕಳುಹಿಸಿದ್ದಾನೆ…
ಅವುಗಳನ್ನು ಉಪೇಕ್ಷಿಸಿ ಉಪಕರಣಗಳ ದಾಸರಾಗುವುದು ದೇವರ ದಯೆಗೆ ಮಾಡಿದ ಅವಮಾನ…
ಆತನಿತ್ತ ಮೈಮನಗಳನ್ನು ಅಧಿಕಾಧಿಕ ಸದುಪಯೋಗ ಮಾಡಿದಂತೆ ಅವುಗಳಲ್ಲಿ ಆತ ಮತ್ತಷ್ಟು ಚೈತನ್ಯವನ್ನು ತುಂಬುತ್ತಾನೆ..
ಹಾಗೆ ಮಾಡದಿದ್ದಾಗ ದೇವರು ಕೊಟ್ಟಿದ್ದು ಕಳೆದುಹೋಗುತ್ತದೆ…ಮನುಷ್ಯನಿರ್ಮಿತವಾದದ್ದು ಹೇಗೂ ಉಳಿಯದು..!

ಹೀಗೆ ಆದಿಕಾವ್ಯವು ಆದಿಕವಿಯ ಹೃದಯದಿಂದ ಆದಿಶಿಷ್ಯರೀರ್ವರ ಹೃದಯಗಳನ್ನು ಪ್ರವೇಶಿಸಿತು..
ಒಂದು ಹೃದಯದ ಭಾವ ಎರಡು ಕಂಗಳ ದ್ವಾರಾ ಜಗದೆಡೆಗೆ ಹರಿಯುವಂತೆ ವಾಲ್ಮೀಕಿಗಳ ರಾಮಾಯಣಾನುಭೂತಿಯು ಕುಶಲವರ ಮೂಲಕ ಜಗದೆಡೆಗೆ ಹರಿಯತೊಡಗಿತು..

ಕಾಶಿಯ ವಿಶ್ವೇಶ್ವರನನ್ನು ಸೇರುವ ಗಂಗೆ ಮೊದಲು ಹರಿದ್ವಾರದ ಮೂಲಕವೇ ಹರಿಯಬೇಕಲ್ಲವೇ..?
ಅಯೋಧ್ಯೆಯಲ್ಲಿ ವಿಶ್ವನಾಯಕನನ್ನು ಸೇರಹೊರಟ ರಾಮಾಯಣಗಂಗೆಯು ಮೊದಲು ಹರಿಯಿತು ಸಂತಸಮೂಹದೆಡೆಗೆ…

ಸಂತರೆಂದರೆ ಹರಿ-ದ್ವಾರವೇ ಅಲ್ಲವೇ..?

|| ಹರೇರಾಮ ||

Tuesday, September 7, 2010

ರಾಮಾಯಣ ರಾಮಾರ್ಪಣ..!

ಹರೇರಾಮ





ಆಹಾ ! ಎಂಥಾ ದೃಶ್ಯವದು…!



ತನ್ನ ಸಾವಿರಾರು ಪ್ರಜೆಗಳನ್ನು ಕೇವಲ ಕಂಠಸಿರಿಯ ಬಲದಿಂದಲೇ ಸೆಳೆಯುವ – ಆಳುವ ಅವಳಿ ಮಕ್ಕಳು ರಾಜಮಾರ್ಗವನ್ನು ಶೋಭಾಯಮಾನಗೊಳಿಸುತ್ತಿದ್ದಾರೆ…!

ಶ್ರವಣ-ನಯನ-ಮನಗಳ ಸಂಯುಕ್ತ ಹಬ್ಬವದು..!



ಕಣ್ತಣಿಸುವ ರೂಪ..ಕಿವಿಗಿಂಪಾದ ಗಾನ..ಮನ ಬೆಳಗುವ ಸಾಹಿತ್ಯಗಳ ತ್ರಿವೇಣೀಸಂಗಮ…



ಅಚ್ಚರಿಯ ಮೇಲಚ್ಚರಿಯಾಯಿತು ಅಯೋಧ್ಯೆಯರಸನಿಗೆ…



ರೂಪ ತನ್ನದೇ..!



ಸ್ವರ ತನ್ನದೇ..!









ಕೊನೆಗೆ ಗಮನಿಸಿ ಕೇಳಿದರೆ ಕುಮಾರರು ಹಾಡುತ್ತಿರುವ ಕಥೆಯೂ ತನ್ನದೇ..!



ಎಲ್ಲೆಲ್ಲೂ ತಾನೇ ! ತನ್ನ ತನವೇ..!



ರಾಮನು ಪ್ರೀತಿಸದವರಾರು..?



ಪರಮಾತ್ಮ ಚೈತನ್ಯವು ತಲುಪದ ಸ್ಥಳವಾವುದು..?



ಸೂರ್ಯಕಿರಣಗಳು ಸ್ಪರ್ಶಿಸದ ಜೀವವೆಲ್ಲಿ..?



ಎಲ್ಲವನ್ನೂ, ಎಲ್ಲರನ್ನೂ ಪ್ರೀತಿಸುವವನವನು..!



ಆದರೆ ಅದೇಕೋ…ಕಣ್ಣರಿಯದ, ಕರುಳರಿಯುವ ಕಾರಣವಿರಬೇಕು..! ಆ ಮಕ್ಕಳಲ್ಲಿ ಅಸಾಮಾನ್ಯವಾದ ಪ್ರೀತಿಯುಂಟಾಯಿತು ಪ್ರಭುವಿಗೆ…



ಮೊದಲ ನೋಟದ ಪ್ರೀತಿಯದು..



ಸಾಮಾನ್ಯವಾಗಿ ಬದುಕಿನಲ್ಲಿ ಯಾವುದಾದರೊಂದು ವಸ್ತುವಿನಲ್ಲೋ, ವ್ಯಕ್ತಿಯಲ್ಲೋ ಪ್ರೀತಿಯುಂಟಾಗುವುದು ಪ್ರಯೋಜನವನ್ನು ಕಂಡಾಗ..



ಆದರೆ ಅತ್ಯಂತ ಅಪರೂಪಕ್ಕೊಮ್ಮೆ ಕೆಲವರನ್ನು ಕಂಡೊಡನೆಯೇ ಕಾರಣವಿಲ್ಲದೆಯೇ ಪ್ರೀತಿ ಮೂಡುವುದೂ ಉಂಟು..



ಅದು ನೈಸರ್ಗಿಕವಾದ ಪ್ರೀತಿ…ಅದುವೇ ನಿಜವಾದ ಪ್ರೀತಿ..!



ರಾಮನಿಗೆ ಕುಶಲವರನ್ನು ಕಂಡೊಡನೆಯೇ ಉಂಟಾದ ಪ್ರೀತಿ ಅಕೃತ್ರಿಮವಾದುದು…ಅನಿಮಿತ್ತವಾದುದು..



ಪ್ರೀತಿಯು ಪರ್ಯವಸಾನವಾಗುವುದು ಸಾಮೀಪ್ಯದಲ್ಲಿ…



ಸಾಮೀಪ್ಯವು ಪರ್ಯವಸಾನವಾಗುವುದು ಅದ್ವೈತದಲ್ಲಿ…



ಕುಶಲವರನ್ನು ಕುರಿತು ರಾಮನ ಅಂತರಾಳದಲ್ಲಿ ಅಂಕುರಿಸಿದ ಪ್ರೀತಿ ತನ್ನ ಮೊದಲ ಹೆಜ್ಜೆಯಿಟ್ಟಿತು…



ಅದಾಗಲೇ ಮನದೊಳಗೆ ಪ್ರವೇಶಿಸಿದ್ದ ಮುದ್ದುಮಕ್ಕಳನ್ನು ಮನೆಯೊಳಗೆ ಬರಮಾಡಿಕೊಂಡನವನು…



ರಾಮನೆಂಬ ಬಿಂದುವಿನಲ್ಲಿ ಕುಶಲವರೆಂಬ ವಿಸರ್ಗವು ಸೇರಿದಾಗ ಅಪೂರ್ವ ಪ್ರೇಮತ್ರಿಕೋಣವೊಂದು ಅಯೋಧ್ಯೆಯ ಅರಮನೆಯಲ್ಲಿ ಅನಾವರಣಗೊಂಡಿತು…



ಕಾನನಮಧ್ಯದಲ್ಲಿ ಅರಳಿ, ಹಳ್ಳಿ ಸೇರಿ ಹಾರವಾಗಿ, ಮಹಾನಗರದ ಮಂದಿರಮಧ್ಯದಲ್ಲಿ ಬೆಳಗುವ ಮೂರ್ತಿಯ ಮುಡಿಯೇರಿ ಶೋಭಿಸುವ ಸುಮಗಳಂತೆ…



ಪ್ರಕೃತಿಗರ್ಭದಲ್ಲಿ ಜನಿಸಿ, ರತ್ನಕಾರನಿಂದ ಸಂಸ್ಕಾರ ಪಡೆದು, ಅರಮನೆ ಸೇರಿ, ಮಹಾರಾಜನ ಮುಕುಟವನ್ನಲಂಕರಿಸುವ ಮಾಣಿಕ್ಯಗಳಂತೆ…



ತಮಸಾತೀರದ ಆಶ್ರಮದಲ್ಲ ಜನಿಸಿ, ವಾಲ್ಮೀಕಿಗಳಿಂದ ಸಂಸ್ಕಾರ ಪಡೆದು, ಅಯೋಧ್ಯಾಮಹಾನಗರಿಯ ಅರಮನೆ ಸೇರಿ, ದೇವರ ದೇವನ – ರಾಜಾಧಿರಾಜನ ಸಾನ್ನಿಧ್ಯದಲ್ಲಿ ಶೋಭಿಸಿದರು ಕುಶಲವರು…



ಆವರೆಗೆ ಕುಮಾರರು ಗಿರಿ-ನದೀ-ಕಾನನಗಳನ್ನು ನೋಡಿದ್ದರು..



ಆಶ್ರಮಗಳನ್ನು, ಋಷಿ-ಮುನಿಗಳನ್ನು ನೋಡಿದ್ದರು..



ನಗರ-ನಾಗರಿಕರನ್ನು, ಅರಮನೆ-ಅರಸರನ್ನು ಕಥೆಯಲ್ಲಿ ಕೇಳಿದ್ದರು..ಕಣ್ಣಲ್ಲಿ ನೋಡಿರಲಿಲ್ಲ…!



ಆದರೆ ಅದೇ ಮೊದಲಾಗಿ ನೋಡಿದರೂ ಅಯೋಧ್ಯೆ ಅವರಿಗೆ ಹೊಸದೆನಿಸಲಿಲ್ಲ..!



ಅರಮನೆ ಮನೆಯಲ್ಲವೆನಿಸಲಿಲ್ಲ..!



ಅರಸ ಅಪರಿಚಿತನೆನಿಸಲಿಲ್ಲ..!



ಭೂಮಂಡಲದ ಸರ್ವೋಚ್ಚ ಸಿಂಹಾಸನವೇರಿ ಮೆರೆಯುವ ಮುಗಿಲೆತ್ತರದ ರಾಮನೇಕೋ ಅತಿಹತ್ತಿರದವನಾಗಿ ಕಂಡುಬಂದ..!



ರಾಮನನ್ನು ನೋಡುವಾಗ ಅದೇಕೋ ಅಮ್ಮನ ನೆನಪಾಯಿತು ಆ ಮಕ್ಕಳಿಗೆ…!



ಕೆಲವು ವ್ಯಕ್ತಿತ್ವಗಳು ಅದೆಷ್ಟು ದೂರವಿದ್ದರೂ ಹತ್ತಿರವೇ ಇರುತ್ತವೆ…



ಕಣ್ಮರೆಯಾದರೂ ಮತ್ತೆ ಮತ್ತೆ ಕಣ್ಮುಂದೆ ಬರುತ್ತವೆ…



ವಿಧಿವಿಪರ್ಯಾಸದಲ್ಲಿ ಸೀತೆಯನ್ನು ರಾಮನೇ ಕಾಡಿಗೆ ಕಳಿಸಿಕೊಟ್ಟಿದ್ದೂ ನಿಜ…



ಮಕ್ಕಳು ಆಕೆಯನ್ನು ಬೀಳ್ಕೊಟ್ಟು ಅಯೋಧ್ಯೆಗೆ ಬಂದಿದ್ದೂ ನಿಜ…



ರಾಮನಿಗೆ ಕಣ್ಮುಂದೆ ಶೋಭಿಸುವ ಮಕ್ಕಳಲ್ಲಿ ಕಾಣದ ಮಡದಿ ತೋರಿಬಂದರೆ…



ಆ ಮಕ್ಕಳಿಗೆ ರಾಮನ ಸಾನ್ನಿಧ್ಯ ಅಮ್ಮನ ಮಡಿಲನ್ನು ನೆನಪಿಸಿತು…



ರಾಮನೇ ಗಂಗೆ;



ಯಮಳರೇ ಯಮುನೆ;



ಸೀತೆಯೇ ಗುಪ್ತಗಾಮಿನಿ ಸರಸ್ವತಿ ;



ಅಯೋಧ್ಯೆಯೇ ಪ್ರಯಾಗವಾಯಿತು ಆ ಕ್ಷಣದಲ್ಲಿ…



ವಾಮನರಾಗಿ ಅಯೋಧ್ಯೆಯನ್ನು ಪ್ರವೇಶಿಸಿದ ಕುಶಲವರು ರಾಮನ ಹೃದಯದಲ್ಲಿ ತ್ರಿವಿಕ್ರಮರಾಗಿ ಬೆಳೆದರು…



ಬಲಿ ಚಕ್ರವರ್ತಿ ನೀಡಿದ್ದು ಮೂರು ಹೆಜ್ಜೆಗಳನ್ನು…



ಆದರೆ ವಾಮನನು ಪಡೆದುಕೊಂಡಿದ್ದು ಮೂರು ಲೋಕಗಳನ್ನು…



ಕ್ಷಣಕಾಲ ಕಿವಿಗೊಟ್ಟು ರಾಮಾಯಣದ ಕೆಲಬಿಂದುಗಳನ್ನು ಆಲಿಸಿದ ರಾಮನಿಗೆ ಕುಶಲವರ ಮುಖದಿಂದ ಸಂಪೂರ್ಣ ರಾಮಾಯಣವನ್ನು ಸವಿಯುವ ಮನಸ್ಸಾಯಿತು…



‘ಏಕಃ ಸ್ವಾದು ನ ಭುಂಜೀತ’…



ಏನನ್ನಾದರೂ ಒಬ್ಬನೇ ಸವಿಯುವುದು ರಾಮನ ಸ್ವಭಾವವೇ ಅಲ್ಲ…



ಹಾಗಾಗಿ ಸಹೋದರರು, ಸಚಿವರು, ಮತ್ತಿತರ ಸಹೃದಯರನ್ನು ರಾಮಾಯಣ ಸವಿಯಲು ಸಾರಿ ಕರೆದನು ಶ್ರೀರಾಮ…



ಪೀಠವೇ ಪೀಠಿಕೆಯನ್ನು ಕೊಟ್ಟರೆ…?



ಕಥಾನಾಯಕನೇ ಕಾವ್ಯಕ್ಕೆ ಮುನ್ನುಡಿಯಿತ್ತರೆ…?



ನಡೆದದ್ದು ಹಾಗೆಯೇ…



ಸ್ವಯಂ ಶ್ರೀರಾಮನೇ ರಾಮಾಯಣಗಾನಕ್ಕೆ ಪ್ರಸ್ತಾವನೆ ಗೈದನೆಂದರೆ ಅದು ಅದ್ಭುತವಲ್ಲವೇ…?



ಸ್ವಯಂ ಗಾಂಧರ್ವತತ್ತ್ವಜ್ಞನೇ ಆದ ಆ ನರದೇವನು ತನ್ನ ಮಧುರಗಂಭೀರಸ್ವರದಿಂದ ಸೇರಿದವರ ಮನಗಳನ್ನು ಸೂರೆಗೊಳ್ಳುತ್ತಾ ಆ ಮಹಾಸಭೆಯನ್ನುದ್ದೇಶಿಸಿ ನುಡಿಯಲುಪಕ್ರಮಿಸಿದನು…



“ಈ ದಿವ್ಯ ಸಭೆಯಲ್ಲಿ ಮಂಡಿಸಿರುವ ಸುಕೃತಿಚೇತನರೇ,



ಈ ಬಾಲಕರಲ್ಲಿ ಅಣು ಮಹತ್ತುಗಳ ಅದ್ಭುತ ಸಮಾವೇಶವನ್ನು ನೋಡಿದಿರಾ..!



ಪುಟ್ಟ ಎದೆಗಳಲ್ಲಿ ಬಹುದೊಡ್ಡ ಗ್ರಂಥ..



ಪುಟ್ಟಪುಟ್ಟ ಕೊರಳುಗಳಲ್ಲಿ ಸಂಗೀತ ಸಾಮ್ರಾಜ್ಯದ ಸಾರ ಸರ್ವಸ್ವ ..



ವಯಸ್ಸು ಕಿರಿದು..



ತಪಸ್ಸು ಹಿರಿದು..!



ಭಸ್ಮಚ್ಛನ್ನವಾದ ಕೆಂಡದಂತೆ ಮುನಿವೇಷದ ಮರೆಯಲ್ಲಿ ನೈಸರ್ಗಿಕವಾದ ರಾಜಲಕ್ಷಣಗಳು..!



ಸ್ಫಟಿಕದ ಪಾತ್ರೆಯಲ್ಲಿ ಬೆಳಗುವ ಜ್ಯೋತಿಯಂತೆ ಮಾನವತನುವಿನಲ್ಲಿ ಮಿನುಗುವ ದೇವಕಾಂತಿ..!



ಈ ಯಮಳ ವಾಮನರು ತಮ್ಮ ಸ್ವರವಿಸ್ತಾರದಿಂದ ತ್ರಿವಿಕ್ರಮರಾಗಿ ಬೆಳೆದು ನಮ್ಮೆಲ್ಲರನ್ನೂ ಆವರಿಸುತ್ತಿದ್ದಾರೆ.



ಈ ಲೋಕವನ್ನೇ ಮರೆಸಿ, ಇನ್ನಾವುದೋ ಲೋಕವನ್ನು ತೆರೆಸುತ್ತಿದ್ದಾರೆ..!



ಎಂದೋ ನಡೆದುಹೋದ ಘಟನೆಗಳು ಈ ಗಾಯನವನ್ನಾಲಿಸುತ್ತಿದ್ದಂತೆಯೇ ಮರುಹುಟ್ಟು ತಾಳುತ್ತಿವೆ..



ಎಂದೆಂದೂ ಕಾಣದ ಆನಂದವೊಂದು ಎಲ್ಲೆಡೆ ಅಂಕುರಿಸುತ್ತಿದೆ..



ಅಲೌಕಿಕವಾದ ಈ ಗಾಯನವು ನನ್ನನ್ನೂ ಕೂಡ ನನ್ನ ಪರಮೋಚ್ಚ ಸತ್ತ್ವದೆತ್ತರಕ್ಕೆ ಎತ್ತುತ್ತಿದೆ..!



ಜೀವಕ್ಷೇಮಂಕರವಾದ ಈ ಧರ್ಮಾಖ್ಯಾನವನ್ನು ಕುಮಾರರು ಮೈಮನವೆಲ್ಲ ಮುಖವಾಗಿ ಆಮೂಲಾಗ್ರವಾಗಿ ಹಾಡಲಿ..



ಮೈಮನವೆಲ್ಲ ಕಿವಿಯಾಗಿ ಕೇಳೋಣ ನಾವೆಲ್ಲರೂ…”



ಸಭೆಯನ್ನುದ್ದೇಶಿಸಿ ಹೀಗೆಂದ ಶ್ರೀರಾಮನು ತನ್ನ ಬೆಳದಿಂಗಳ ದೃಷ್ಟಿಯನ್ನು ಕುಮಾರರೆಡೆಗೆ ಬೀರುತ್ತ ಹಾಡಲು ಪ್ರೇರಿಸಿದನು..



ಅಧರ ಮಧುರ, ವದನ ಮಧುರ, ನಯನ ಮಧುರ, ಹೆಚ್ಚೇಕೆ ಸರ್ವಮಧುರನಾದ ಮಧುರಾಧಿಪತಿಯಿಂದ ಸಂಪ್ರೇರಿತರಾದ ಕುಮಾರರು ಭಾವದುಂಬಿ, ರಸವುಕ್ಕಿ , ಮಧುರ ಮಧುರವಾಗಿ ಹಾಡತೊಡಗಿದರು ಅನಾದಿನಾಯಕನ ಆದಿಕಾವ್ಯವನ್ನು..



ಸಹಜವಾಗಿಯೇ ಮಧುರವಾದ ಕುಶಲವರ ಕಂಠಗಳು ಶ್ರೀರಾಮನ ಸಾನ್ನಿಧ್ಯ ಮತ್ತು ಪ್ರೇರಣೆಗಳಿಂದಾಗಿ ಮತ್ತಷ್ಟು ಮಧುರವಾದವು..!



ಗಂಗೆಯನ್ನು ಬರಮಾಡಿಕೊಳ್ಳುವ ಶಾಂತಸಾಗರದಂತೆ,ಕುಶಲವರು ನಿರಂತರ ಹರಿಸಿದ ಕಥಾಲಹರಿಯನ್ನು ಒಳಗೊಂಡನು ಶ್ರೀರಾಮ..



ಆ ಕಥಾಗಂಗೆಯು ಅವನ ಅಂತರಂಗದ ತುಂಬೆಲ್ಲ ತುಂಬಿ ತುಳುಕಿತು ಆನಂದಬಾಷ್ಪದ ರೂಪ ತಾಳಿ ಕಂಗಳಲ್ಲಿ…



ಆತನ ಹನಿಗೂಡಿದ ನಿಮೀಲಿತ ನೇತ್ರಗಳು ಹಿಮಬಿಂದುಗಳಿಂದೊಪ್ಪುವ ಸಂಧ್ಯಾಕಮಲಗಳಂತೆ ಶೋಭಿಸಿದವು..



ಮಹಾಪ್ರಭುವಿನೊಂದಿಗೆ ಕಳೆದ ರಸನಿಮಿಷಗಳು, ಒಡಗೂಡಿ ಅನುಭವಿಸಿದ ಸಂಕಟ-ಸಂತೋಷಗಳು ‘ಪುನರ್ನವ’ಗೊಂಡವು ಲಕ್ಷ್ಮಣ-ಭರತ-ಶತ್ರುಘ್ನ-ಸುಮಂತ್ರರೇ ಮೊದಲಾದ ರಾಮನ ಒಡನಾಡಿಗಳಲ್ಲಿ..



ಹಾಡುವುದರಲ್ಲಿ ಎರಡು ವಿಧ..



ಇಂದ್ರಿಯ ರಂಜನೆಯಾಗುವಂತೆ ಹಾಡಿದರೆ ಅದು”ದೇಶೀ”



ಆತ್ಮಕ್ಕೆ ಹಿತವಾಗುವಂತೆ – ಮುಕ್ತಿಗೆ ಮಾರ್ಗವಾಗುವಂತೆ ಹಾಡಿದರೆ ಅದು “ಮಾರ್ಗ”



ಕರಣವನ್ನೂ, ಅಂತಃಕರಣವನ್ನೂ ಮಾತ್ರವಲ್ಲ, ಅಂತರಾಳದಲ್ಲಿ ಹುದುಗಿರುವ ಆತ್ಮ – ಪರಮಾತ್ಮರನ್ನೂ ತೃಪ್ತಿಪಡಿಸುವ ಸಂಗೀತ ರೀತಿಯದು..



ಕುಶಲವರು ರಾಮಾಯಣವನ್ನು ಹಾಡಿದ್ದು “ಮಾರ್ಗ” ವಿಧಾನದಲ್ಲಿ..



ಏಕೆಂದರೆ, ರಾಮಾಯಣವು ಕೇವಲ ಬುದ್ಧಿಜೀವಿಗಳ ಕಾವ್ಯವಲ್ಲ.



ಅದು ಹೃದಯ ಜೀವಿಗಳ ಕಾವ್ಯ ; ಆತ್ಮಬಂಧುಗಳ ಕಾವ್ಯ..



ಸಾಗರದಿಂದ ಆವಿಯಾಗಿ ಮೇಲೇಳುವ ನೀರು ಮೋಡವಾಗಿ ತೇಲಿ, ಮಳೆಯಾಗಿ ಸುರಿದು, ಹೊಳೆಯಾಗಿ ಹರಿದು ಪುನಃ ಸಾಗರವನ್ನೇ ಸೇರುವಂತೆ..



ಮುನಿಮನದಲ್ಲಿ ಸನ್ನಿಹಿತನಾದ, ಶ್ರೀರಾಮನಿಂದಲೇ ಉಗಮಿಸಿದ ಶ್ರೀರಾಮಾಯಣವು ಕುಶಲವರ ಮೂಲಕ ಶ್ರೀರಾಮಾರ್ಪಣವಾಯಿತು.



ಕಾಲವೆಂದೂ ನಿಲ್ಲದು..

ಅದೆಂದೆಂದೂ ಹಿಂದೆ ಸರಿಯದು..



ಸದಾ ಮುಂದು ಮುಂದಕ್ಕೆ ಸರಿಯುತ್ತಲೇ ಇರುವುದು ಕಾಲದ ಸ್ವಭಾವ..



ಆದರೆ ಅಂದು ಅಯೋಧ್ಯೆಯಲ್ಲಿ ಕುಶಲವರು ರಾಮಾಯಣವನ್ನು ಹಾಡತೊಡಗಿದಾಗ ಕಾಲಕ್ಕೆ ಮುಂದೆ ಸರಿಯಲು ಸಾಧ್ಯವೇ ಆಗಲಿಲ್ಲ..!



ಅದು ನಿಂತೇ ಬಿಟ್ಟಿತು.. ಮಾತ್ರವಲ್ಲ, ಮೆಲ್ಲಮೆಲ್ಲನೆ ಹಿಂದುಹಿಂದಕ್ಕೆ ಸರಿಯತೊಡಗಿತು..!



ಸಕಲರನ್ನೂ ತಮ್ಮ ಗಾನಪುಷ್ಪಕದಲ್ಲಿ ಕುಳ್ಳಿರಿಸಿಕೊಂಡು ಕುಶಲವರು ಹೊರಟೇಬಿಟ್ಟರು ಕಾಲವಿಹಾರಕ್ಕೆ..!



ಈ ಕಾಲದಿಂದ ಆ ಕಾಲಕ್ಕೆ..



ರಾಮಸಮ್ಮುಖದ ಕಾಲದಿಂದ ರಾಮಪ್ರತೀಕ್ಷೆಯ ಕಾಲಕ್ಕೆ..!



ಅಯೋಧ್ಯೆ ನಿಶ್ಶಬ್ದವಾಯಿತು..



ಜಡವಸ್ತುಗಳು ಮಾತ್ರವೇ ಉಳಿದವಲ್ಲಿ..!



ಸಕಲ ಚೇತನರೂ ರಾಮನ ಬದುಕಿನ ಜೊತೆಗೇ ಪಯಣಿಸುವ ಕುಶಲವರನ್ನು ಹಿಂಬಾಲಿಸಿದರು..



ಮುಚ್ಚಿದ ಕಣ್ಣುಗಳ ಮುಂದೆ ಮೂಡತೊಡಗಿತ್ತು ರಾಮಾಯಣ..





ಹರೇರಾಮ

ರಾಮಸಾಗರಗಾಮಿನೀ…

ಹರೇರಾಮ





ಸೋಮರಸ ಒಳಸೇರಿದರೆ ಸುಮ್ಮನಿರಗೊಡುವುದೇ…?

ಈ ಲೋಕವನ್ನು ಮರೆಸಿ ಇನ್ನಾವುದೋ ಲೋಕದಲ್ಲಿ ವಿಹರಿಸುವಂತೆ ಮಾಡದೇ ಅದು…?

ರಾಮರಸ ಒಳಸೇರಿದಾಗ ಕುಶಲವರ ಸ್ಥಿತಿಯೂ ಹಾಗೆಯೇ ಆಯಿತು…



ಬಿಂದುವಿನೊಳು ಸಿಂಧು ಹಿಡಿಸುವುದೇ…?

ವಿಶ್ವಂಭರನ ಚರಿತೆಯ ವಿಶ್ವಕಾವ್ಯವು ಪುಟಾಣಿಮಕ್ಕಳ ಪುಟ್ಟಹೃದಯದೊಳಗೆ ಅದು ಹೇಗೆ ಹಿಡಿಸಿತೋ..?

ಹಿಡಿಸಲಾರದೇ ಹೊರಹೊಮ್ಮಿ ಹುಚ್ಚು ಹೊಳೆಯಾಗಿ ಹರಿದಿರಬೇಕು…!









ಕೈಯಲ್ಲಿ ತಂಬೂರಿ…

ಕಣ್ತುಂಬ ರಾಮ…

ಬಾಯಲ್ಲಿ ರಸಕಾವ್ಯ…



ಗಂಗೋತ್ರಿಯಿಂದ ಹೊರಟು ಗಂಗಾಸಾಗರವನ್ನು ಸೇರುವ ಮುನ್ನ ದೇಶದೆಲ್ಲೆಡೆ ಹರಿಯವ ಗಂಗೆಯಂತೆ…

ಆಶ್ರಮದಿಂದ ಹೊರಹೊರಟು ಹಳ್ಳಿಹಳ್ಳಿಗಳಲ್ಲಿ ಗಲ್ಲಿಗಲ್ಲಿಗಳಲ್ಲಿ ಹಾಡತೊಡಗಿದರವರು ರಾಮಕಥೆಯನ್ನು…



” ಐಸೀ ಲಾಗೀ ಲಗನ್…

ಮೀರಾ ಹೋಗಯೀ ಮಗನ್…

ವೋ ತೋ ಗಲೀ ಗಲೀ ಹರಿಗುನ್ ಗಾನೇ ಲಗೀ…”

ಕೃಷ್ಣರಸವೂಡಿದಾಗ ಅರಮನೆಯನ್ನು ಪರಿತ್ಯಜಿಸಿ, ಗಲ್ಲಿಗಲ್ಲಿಗಳಲ್ಲಿ ಹರಿಗುಣವನ್ನು ಹಾಡಿ ಹಾಡಿ ಕುಣಿದ, ಕುಣಿದು ಕುಣಿದು ಹಾಡಿದ ಮೀರಾ ನೆನಪಾಗುವಳಲ್ಲವೇ ಇಲ್ಲಿ…!?



ತನ್ನಲ್ಲಿ ತನ್ಮಯರಾದ ರಾಮತನಯರನ್ನು ಕಂಡು ರಾಮಾಯಣಮಾತೆಯೂ ಕರಗಿದಳೇನೋ…?

ಸೀತಾಮಾತೆಯನ್ನು ಬೀಳ್ಕೊಟ್ಟುಬಂದ ಕುಶಲವರನ್ನು ಅವಳು ತನ್ನ ಮಡಿಲೊಳಗೆ ಹಾಕಿಕೊಂಡಳು…

ಮಾತ್ರವಲ್ಲ, ಮನೆಗೆ ಕರೆದೊಯ್ದಳು…!



ಅಯೋಧ್ಯೆಯಲ್ಲದೆ ಮತ್ತಾವುದು ಅವಳ ಮನೆ…?

ತಮಸಾತೀರದಲ್ಲಿ ಹುಟ್ಟಿ, ಸರಯೂತೀರದಲ್ಲಿ ನೆಲೆಸಿ, ವಿಶ್ವದಲ್ಲೆಲ್ಲ ಪಸರಿಸಿದವಳಲ್ಲವೇ ಅವಳು…?



ಅದು ತಮ್ಮೂರು, ತಮ್ಮ ಮನೆ ಎಂಬ ಅರಿವಿಲ್ಲದೆಯೇ ಅಯೋಧ್ಯೆಯನ್ನು ಪ್ರವೇಶಿಸಿದರು ಕುಶಲವರು…

ಮನೆಗೈತರುವ ತನ್ನೊಡೆಯನ ಕುಡಿಗಳನ್ನು ಕಂಡು ಅವ್ಯಕ್ತವಾಗಿ ಮಿಡಿದಳು ಅಯೋಧ್ಯೆ…!

‘ಈರ್ವರು ರಾಮರು ಬಂದರೇ’ ಎಂಬ ಬೆರಗಿನಲ್ಲಿ ಹರಿಯುವುದನ್ನೇ ಮರೆತಳು ಸರಯೂ…!



ಬಾಲರಾಮನು ನಲಿದಾಡಿದ ಅಯೋಧ್ಯೆಯ ಬೀದಿಗಳಲ್ಲಿ – ರಾಜಬೀದಿಗಳಲ್ಲಿ ನಲಿನಲಿದು ಹಾಡಿದರು ರಾಮಬಾಲರು…

ಮಿಂಚಿನಮರಿಗಳು ಸಂಚರಿಸಿದಂತಾಯಿತು ನಗರಿಯಲ್ಲಿ…



ಕುಮಾರರ ಗಾನಧ್ವನಿಯು ಪಸರಿಸುತ್ತಿದ್ದಂತೆಯೇ…

ಮಲಗಿದವರೆದ್ದುಕುಳಿತರು…

ಕುಳಿತವರು ನಿಂತರು…

ನಿಂತವರು ನಾದದೆಡೆಗೆ ನಡೆದರು…

ಕೇಳುಗರ ಜೊತೆಗೂಡಿದರು…



ಅಯೋಜಿತವಾಗಿ ಕುಶಲವರ ರಾಮಾಯಣಗಾನವು ನಡೆಯತೊಡಗಿದಾಗ…

ಬೀದಿಯಲ್ಲಿ ನಡೆದುಹೋಗುವವರು ನಿಂತರು…

ನಿಂತವರು ಕುಳಿತರು…

ಕುಳಿತವರು ಕಣ್ಮುಚ್ಚಿದರು…

ಈ ಲೋಕವನ್ನೇ ಮರೆತರು…

ಕುಮಾರರ ಗಾನತರಂಗವು ಅಯೋಧ್ಯೆಯಲ್ಲಿ ಯಾರು-ಯಾರನ್ನು ತಲುಪಿತೋ ಅವರು ತಮಗರಿವಿಲ್ಲದಂತೆಯೇ ಆ ಕಡೆಗೆ ಸೆಳೆಯಲ್ಪಟ್ಟರು…



ಗ್ರಾಹಕನು ಬಯಸಿದ ವಸ್ತುವನ್ನು ಕೊಡುವಷ್ಟರಲ್ಲಿ ರಾಮಾಯಣವನ್ನು ಕೇಳಿಸಿಕೊಂಡ ವರ್ತಕನಿಗೆ ಮೌಲ್ಯವನ್ನು ತೆಗೆದುಕೊಳ್ಳುವುದೇ ಮರೆತುಹೋಯಿತು…

ಒಲೆಯ ಮೇಲಿಟ್ಟ ಹಾಲಿನಪಾತ್ರೆಯನ್ನು ಇಳಿಸುವುದನ್ನೇ ಮರೆತು ಗೃಹಿಣಿಯರು ಬೀದಿಗೆ ಧಾವಿಸಿದರು…

ಅಮ್ಮನ ಕೆಚ್ಚಲಲ್ಲಿ ಬಾಯಿಟ್ಟು ಹಸಿವಾರಿಸಿಕೊಳ್ಳುತ್ತಿದ್ದ ಎಳೆಗರುಗಳು ಮುಖ ತಿರುಗಿಸಿ, ಕಿವಿ ನಿಮಿರಿಸಿ ರಾಮಾಯಣ ಕೇಳತೊಡಗಿದವು…

ಕ್ಷಣವೊಂದರಲ್ಲಿ ಹತ್ತೂ ದಿಶೆಗಳನ್ನವಲೋಕಿಸುವ ಸಹಸ್ರದೃಷ್ಟಿಗಳಾದ ಪ್ರಹರಿಗಳ ಕಣ್ಣುಗಳು ಕುಮಾರರಲ್ಲಿ ಕೀಲಿಸಿಹೋದವು…

ವಜ್ರಕಠಿಣವಾದ ಅವರ ಮುಖದಲ್ಲಿ ಒಸರಿತು ಕಣ್ಣೀರು…



ಸಂಖ್ಯೆಯಿಲ್ಲದ ಸಂಖ್ಯೆಯಲ್ಲಿ ಸೇರಿದ ಜನಸಮೂಹವು ಕುಶಲವರು ಸಂಚರಿಸಿದಂತೆ ಜೊತೆಗೂಡಿ ಹಿಂಬಾಲಿಸತೊಡಗಿತು…

ಅಯೋಧ್ಯೆಯಲ್ಲಿ ಉಳಿದದ್ದು ಎರಡೇ ಸದ್ದು…

ಕುಶಲವರ ಗಾನವೊಂದಾದರೆ ಜನಸಮೂಹದ ಉದ್ಗಾರವಿನ್ನೊಂದು…



ಶರೀರದ ಎಲ್ಲಿಯೋ ಒಂದೆಡೆ ಉಂಟಾಗುವ ಸುಖಸ್ಪರ್ಶ ಕ್ಷಣಮಾತ್ರದಲ್ಲಿ ಹೃದಯವನ್ನು ತಲುಪಿ ಅಲ್ಲಿ ಮಧುರಭಾವಕಂಪನಗಳನ್ನೇರ್ಪಡಿಸುವಂತೆ…

ಅಯೋಧ್ಯೆಯ ಬೀದಿಗಳಲ್ಲುಂಟಾದ ಕುಶಲವರ ಪಾದಸ್ಪರ್ಶವು ಅರಮನೆಯ ಅಂತರಾತ್ಮದಲ್ಲಿ ಅವ್ಯಕ್ತ ವಾತ್ಸಲ್ಯಕಂಪನಗಳನ್ನೇರ್ಪಡಿಸಿತು…

ತನ್ನ ನಿತ್ಯಸಹಚರಿಯಾದ ಮೂಲಪ್ರಕೃತಿಯ ಚಿರಕಾಲವಿರಹದಿಂದ ಸಂತಪ್ತನಾದ ಪರಮಪುರುಷನಿಗೆ ಆಕೆಯ ಹೃದಯದುಸಿರೇ ತಂಗಾಳಿಯಾಗಿ ಅರಮನೆಯ ಸುತ್ತ ಸುಳಿದಾಡಿದಂತೆನಿಸತೊಡಗಿತು…

ಭೂಸುತೆಯನ್ನು ಬಹುಕಾಲದಿಂದ ಕಾಣದೆ ಕುಂದಿದ ಕಂಗಳು, ಆಕೆಯ ಸವಿನುಡಿಗಳನ್ನು ಕೇಳಲು ಅದೆಷ್ಟೋ ಕಾಲದಿಂದ ಕಾತರಿಸಿದ ಕಿವಿಗಳು ಅದೇನೋ ಸುಳಿವು ಸಿಕ್ಕಂತೆನಿಸಿ ತನುವಿನಲ್ಲಿ ರೋಮಾಂಚನ ತಂದವು…

ಯಾರ ಅಪ್ಪಣೆಯನ್ನೂ ಎದುರು ನೋಡದೆ ನೇರವಾಗಿ ಒಳಬರುವ ಮನೆಯ ಮಕ್ಕಳಂತೆ ಎಳೆಯ ಕೊರಳುಗಳಿಂದ ಹೊರಹೊಮ್ಮಿದ ಮಧುರಮಂಗಲನಿನಾದವು ಅರಮನೆಯ ಒಳಪ್ರವೇಶಿಸಿ ದೊರಯ ಕಿವಿದೆರೆಗಳನ್ನು ಮೀಟಿತು…

ಕಿರಿಬೆರಳ ಹಿಡಿದೆಳೆಯುವ ಎಳೆಯ ಕರಗಳಂತೆ ಬಳಿಕರೆಯತೊಡಗಿತು ಇಲ್ಲವೆನ್ನಲಾರದಂತೆ…

ಧರ್ಮವನ್ನುಳುಹಲು ದಂಡಕೆಯ ಕಂಟಕಗಳಿಂದ ವಿದ್ಧವಾದ ಶ್ರೀಪಾದಗಳು ಅಚಿಂತಿತವಾಗಿ – ಅಪ್ರಯತ್ನವಾಗಿ ಉಪ್ಪರಿಗೆಯ ಮೆಟ್ಟಿಲುಗಳನ್ನೇರಿದವು…



ಗಗನಾಂಗಣದ ಮಧ್ಯೆ ನಿಂತು ಧರಣಿಯೆಡೆಗೆ ದೃಷ್ಟಿ ಬೀರುವ ಪೂರ್ಣಚಂದ್ರನಿಗೆ ಸಾಗರಮಧ್ಯದಲ್ಲಿ ತನ್ನದೇ ಪ್ರತಿಬಿಂಬವು ಗೋಚರಿಸುವಂತೆ…

ಉಪ್ಪರಿಗೆಯಲ್ಲಿ ನಿಂತು ರಾಜಮಾರ್ಗದೆಡೆಗೆ ದೃಷ್ಟಿ ಹಾಯಿಸಿದ ರಾಮಚಂದ್ರನಿಗೆ ಗೋಚರಿಸಿದವು ಜನಸಾಗರದ ನಡುವೆ ಶೋಭಿಸುವ ತನ್ನದೇ ಅವಳಿ ಪ್ರತಿಬಿಂಬಗಳು…!



ಭುವಿಯನ್ನು ಬೆಳಗುವ ತನ್ನ ಎಳೆಯ ಕಿರಣಗಳ ಶೋಭೆಯನ್ನು ವೀಕ್ಷಿಸಲು ಸೂರ್ಯದೇವನು ಇಳಿದು ಬಂದಂತಿದ್ದ, ತನ್ನ ತರಂಗಗಳ ವಿಲಾಸವನ್ನು ವೀಕ್ಷಿಸಲು ಸಾಗರವೇ ಮೇಲೆದ್ದುಬಂದಂತಿದ್ದ ಅಪೂರ್ವ ಸನ್ನಿವೇಶವದು…



ಅಚ್ಚರಿ-ಮೆಚ್ಚುಗೆ ತುಂಬಿದ ಹೃದಯದಿಂದ; ಎವೆಯಿಕ್ಕದ ಕಂಗಳಿಂದ ಮೈಮರೆತು ಮಕ್ಕಳನ್ನು ನೋಡಿಯೇನೋಡಿದನು ಪುರುಷೋತ್ತಮ…





ಹರೇರಾಮ